ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿ, ಡಂಬಲ್ಸನಿಂದ ಹೊಡೆದು ಹತ್ಯೆಮಾಡಿದ ದಂಪತಿ! | Janata news
ಕೋಲಾರ : ತಂತ್ರವಾದಿಯ ಮಾತನ್ನು ಕೇಳಿದ ತಾಯಿಯೊಬ್ಬಳು ವಯಸ್ಸಿಗೆ ಬಂದ ತನ್ನ ಹೆಣ್ಣುಮಕ್ಕಳನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಪದ್ಮಜಾ ಹಾಗೂ ಆಕೆಯ ಪತಿ ಪುರುಷೋತ್ತಮ ನಾಯ್ಡು ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮತ್ತು ತಾಯಿ ಪದ್ಮಜಾ ಅವರು ಖಾಸಗಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕೆಲಸ ಮಾಡುತಿದ್ದರು.
ಪದ್ಮಜಾ ಹಾಗೂ ಪುರುಷೋತ್ತಮ ನಾಯ್ಡು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಾಕೆ ಸ್ನಾತಕೋತ್ತರ ಪದವೀಧರೆ, ಜೊತೆಯಲ್ಲೇ ಮುಂಬೈನಲ್ಲಿ ಎಆರ್ ರೆಹಮಾನ್ ಮ್ಯೂಸಿಕ್ ಕ್ಲಾಸ್ನಲ್ಲೂ ಅಧ್ಯಯನ ನಡೆಸಿ ಮುಂಬೈನಿಂದ ಮದನಪಲ್ಲಿಗೆ ವಾಪಸ್ ಬಂದಿದ್ದಳು. ಮತ್ತೊಬ್ಬಳು ಬಿಬಿಎ ಪದವೀಧರೆ.
ಕೊರೊನಾ ಲಾಕ್ಡೌನ್ ಬಳಿಕ ಇವರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿತ್ತು ಎನ್ನಲಾಗಿದೆ.
ಮದನಪಲ್ಲಿ ಶಿವಾಲಯಂ ದೇವಾಲಯದ ರಸ್ತೆ ಬಳಿ ಘಟನೆ ನಡೆದಿದೆ. ನಂತರ ಕಪಟ ಸ್ವಾಮಿಯೊಬ್ಬನ ಮಾತು ನಂಬಿ, ಭಾನುವಾರ ರಾತ್ರಿ ಪೂಜೆ ಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ ದಂಪತಿ ಕೊಲೆ ಮಾಡಿದ್ದಾರೆ. ನಂತರ ಡಂಬಲ್ಸನಿಂದ ಹೊಡೆದು ಹತ್ಯೆಮಾಡಿದ್ದಾಳೆ ಎನ್ನಲಾಗಿದೆ.